Pages

ಹೂದೋಟದ ಹಾದಿಯಾಗೆ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಹೂದೋಟದ ಹಾದಿಯಾಗೆ
ಊರಿನಾಚೆ ತೋಪಿನಾಗೆ ।
ತಂಗಾಳಿ ಬೀಸಿದ್ಹಾಂಗೆ
ಹೊಂಬಾಳೆಯು ತೂಗಿದ್ಹಾಂಗೆ
ನಿನ್ನ ಪ್ರೀತಿ ನೆನಪು ತಂದಿತೋ
ನಿಂತಲ್ಲೇ ಕನಸು ಕಂಡಿತೋ
ಬಾಳುವಾಸೆ ಮತ್ತೆ ಉಕ್ಕಿ ಬಂದಿತೋ ॥

ಮಾರಿಹಬ್ಬ ಮಾಡುವಾಗ ದಾರಿ ತಪ್ಪಿ ನಡೆದೆನೆಂದು
ಕೋಪಗೊಂಡು ಕೊಂಕನಾಡಿ ಸ್ನೇಹ ಕದಡಿತೋ
ಬೆಂದು ಹೋದ ಗದ್ದೆಯಾಗೆ ಹೊಸ ಪೈರು ಚಿಗುರಿದ್ಹಾಗೆ
ದಂಡಿ ದಂಡಿ ಆಸೆ ಉಕ್ಕಿ ಹಸಿರು ಮೂಡಿತೋ ॥೧॥

ಘಾಟಿ ಜಾತ್ರೆ ಕೂಡಿದಾಗ ನಿನಗೆ ಎರಡು ಬಗೆದೆನೆಂದು
ಶಾಪ ಹಾಕಿ ದೂರವಾಗಿ ಮನಸು ಒಡೆಯಿತೋ
ಬತ್ತಿಹೋದ ಹಳ್ಳದಾಗೆ ಮತ್ತೆ ನೀರು ಬಂದ ಹಾಗೆ
ಕೊಂಚ ಕೊಂಚ ಮೋಹವುಕ್ಕಿ ಒಸಗೆ ಕರೆಯಿತು ॥೨॥

0 comments:

Popular Posts