Pages

ಈ ವಿರಹ ಕಡಲಾಗಿದೆ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಈ ವಿರಹ ಕಡಲಾಗಿದೆ ।
ನೀನಿರದೆ, ಇನಿದಾದ ಸನಿಹ ಸಿಗದೆ
ಸವಿನೆನಪೇ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ॥

ಕೂಡಿದ ಹಸಿಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ॥೧॥

ಪ್ರೀತಿಯ ಸಿರಿವೀಣೆ ಮೀಟಿದೆ ಈ ಹೃದಯ
ನಿಂತಲ್ಲಿ ಕುಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖಭೋಗ ಬೇಡಿದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ॥೨॥

0 comments:

Popular Posts