Pages

ಕರ್ತಾ ಕೃಷ್ಣಯ್ಯ ನೀ ಬಾರಯ್ಯ

Friday 20 March 2009

ಸಾಹಿತ್ಯ-ಪ್ರಸನ್ವೆಂಕಟದಾಸ


ಕರ್ತಾ ಕೃಷ್ಣಯ್ಯ ನೀ ಬಾರಯ್ಯ ।
ಎನ್ನಾರ್ತದನಿಗೊಲಿದು ಬಾರಯ್ಯ ॥

ಸುಗುಣದಖಣಿಯೆ ನೀ ಬಾರಯ್ಯ ।
ಎಮ್ಮಘವ ನೋಡಿಸಲು ನೀ ಬಾರಯ್ಯ ।
ಧಗೆಯೇರಿತು ತಾಪ ಬಾರಯ್ಯ ಸದಾ ।
ಮುಗುಳ್ನಗೆ ಮಳೆಗೆರೆಯೆ ಬಾರಯ್ಯ ॥೧॥

ವೈರಿವರ್ಗದಿ ನೊಂದೆ ಬಾರಯ್ಯ ।
ಮತ್ಯಾರೂ ಗೆಳೆಯರಿಲ್ಲ ಬಾರಯ್ಯ ।
ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ ।
ಒಳ್ಳೆ ದಾರಿಯ ತೋರಲು ಬಾರಯ್ಯ ॥೨॥

ವೈರಾಗ್ಯಭಾಗ್ಯವ ಕೊಡಬಾರಯ್ಯ ।
ನಾನಾರೋಗದ ಭೇಷಜ ಬಾರಯ್ಯ ।
ಜಾರುತದಾಯು ಬೇಗ ಬಾರಯ್ಯ ।
ಉದಾರ ಪ್ರಸನ್ನವೆಂಕಟ ಬಾರಯ್ಯ ॥೩॥

Read more...

ಎನ್ನ ಪಾಲಿಸೋ ಕರುಣಾಕರ

ಸಾಹಿತ್ಯ-ಮಹೀಪತಿದಾಸ


ಎನ್ನ ಪಾಲಿಸೋ ಕರುಣಾಕರ ।
ಪನ್ನಗಶಯನ ಗದಾಧರ ॥

ದೇವಕಿನಂದನ ಹರಿಮಧುಸೂದನ ।
ಅಸುರಾಂತಕ ಮುರಳೀಧರ ।
ಬಿಸರುಹನಾಭ ಸರ್ವೇಶನೆ ಮುನಿ-
-ಮಾನಸಸಂಚಾರ ಮಾಧವ ॥೧॥

ಪರಮಪುರುಷ ಉರಗಾಶನವಾಹನ ।
ಕರುಣಾರ್ಣವ ವಡವಾನಲ ।
ಸರಸಿಜೋದ್ಭವ ಗಿರಿಜಾವಲ್ಲಭನುತ ।
ವರಸುಜನಾವಳಿಪಾಲನ ॥೨॥

ಕಾವನಪಿತ ಮುಚಕುಂದವರದ ರಾ-
-ಜೀವನಯನ ನಾರಯಣ ।
ಶ್ರೀವತ್ಸಲಾಂಛನ ಗುರುಮಹೀಪತಿ ।
ಜೀವನಸಖ ಶ್ರೀಕೃಷ್ಣನ ॥೩॥

Read more...

ಆವ ರೋಗವು ಎನಗೆ ದೇವ ಧನ್ವಂತ್ರಿ

ಸಾಹಿತ್ಯ-ಗೋಪಾಲದಾಸ


ಆವ ರೋಗವು ಎನಗೆ ದೇವ ಧನ್ವಂತ್ರಿ ।
ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ॥

ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ ।
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ ।
ಹರಿಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆ ।
ಹರಿಪ್ರಸಾದವು ಎನಗೆ ಸವಿಯಾಗದಯ್ಯ ॥೧॥

ಹರಿಪಾದಸೇವೆಗೆನ್ನ ಹಸ್ತಗಳು ಚಲಿಸವು ।
ಹರಿಗುರುಗಳಂಘ್ರಿಗೆ ಶಿರಬಾಗದಯ್ಯ ।
ಹರಿಯ ನಿರ್ಮಾಲ್ಯ ಆಘ್ರಾಣಿಸದು ನಾಸಿಕವು ।
ಹರಿಯಾತ್ರೆಗೆನ್ನ ಕಾಲೇಳವಯ್ಯ ॥೨॥

ಅನಾಥಬಂಧು ಗೋಪಾಲವಿಠಲರೇಯ ।
ಎನ್ನಭಾಗದ ವೈದ್ಯ ನೀನೆಯಾಗಯ್ಯ ।
ಅನಾದಿಕಾಲದ ಭವರೋಗ ಕಳೆಯಯ್ಯ ।
ನಾನೆಂದಿಗೂ ಮರೆಯೆ ನೀ ಮಾಡಿದುಪಕಾರ ॥೩॥

Read more...

ರಾಜ ಬೀದಿಯೊಳಗಿಂದ

ಸಾಹಿತ್ಯ-ವಾದಿರಾಜತೀರ್ಥ


ರಾಜ ಬೀದಿಯೊಳಗಿಂದ ಕಸ್ತೂರಿರಂಗ ।
ತೇಜನೇರಿ ಮೆರೆದು ಬಂದ ॥

ಸುತ್ತಮುತ್ತಲು ಸಾವಿರಾರು ಸಾಲುದೀವಿಗೆ ।
ಹತ್ತುದಿಕ್ಕಿಲಿ ಬೆಳಗುತಿದ್ದ ಹಗಲು ಬತ್ತಿಯು ।
ನಿಸ್ತರಾದಿ ಭೂಸುರರು ಸುತ್ತುಗಟ್ಟಿ ನಿಂತಿರಲು ।
ಮತ್ತೆ ನಮ್ಮೊಳೆಂತು ತೇಜಿ ಮೆಲ್ಲನೆ ನಡೆಸುತ್ತ ಜಾಣ ॥೧॥

ತಾಳ ಶಂಖ ಭೇರಿ ತಂಬೂರಿ ಮೊದಲಾದ ।
ಮೇಲು ಪಂಚವಾದ್ಯಗಳೆಲ್ಲ ಹೊಗಳಿ ಹೊಗಳಲು ।
ಗಾಳಿಗೋಪುರದ ಮುಂದೆ ದಾಳಿಯಾಡುವಂತೆ ಸುತ್ತ ।
ಧೂಳಿಯನೆಬ್ಬಿಸಿ ವೈಯ್ಯಾಳಿಯ ನೀಕ್ಕುತ್ತ ಜಾಣ ॥೨॥

ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು ।
ಮೋದದಿಂದ ಗಾಯಕರು ಮೌರಿ ಪಾಡಲು ।
ಹಾದಿಬೀದಿಯಲ್ಲಿ ಭೂಸುರ ಜನರಿಗೆಲ್ಲ ।
ಆದರದಿಂದಿಷ್ಟಿತ ಅಮೃತಾನ್ನವನ್ನಿಕ್ಕುತ ॥೩॥

ರಂಭೆ ಮೊದಲಾದ ಸುರರಮಣಿಯರು ।
ತುಂಬಿದಾರುತಿಯ ಪಿಡಿದು ಕೂಡಿ ಪಾಡಲು ।
ಶಂಭುಮುಖ ನಿರ್ಜರನೆ ಪರಾಕೆನುತಲಿ ।
ಅಂಬುಧಿ ಭವಾಬ್ದಿಗಳ ಆಳಿದ ಶ್ರೀರಂಗನಾಥ ॥೪॥

ಹಚ್ಚನೇಗೆ ಸಾರುಬೇಳೆ ಹಾಲು ಕೆನೆಗಳು ।
ಮುಚ್ಚಿ ತಂದ ಕೆನೆಮೊಸರು ಮೀಸಲುಬೆಣ್ಣೆಯು ।
ಹಚ್ಚಿ ತುಪ್ಪ ಪಕ್ವವಾದ ಅತ್ತಿರಸ ಹುಗ್ಗಿಯನ್ನು ।
ಮೆಚ್ಚಿಯುಂಡು ಪಾನಕ ನೀರ್ ಮಜ್ಜಿಗೆಗಳ್ ಸವಿದು ಬೇಗ ॥೫॥

ಮುತ್ತಿನ ತುರಾಯಿ ಅಂಗಿ ಮುಂಡಾಸದಿ ।
ತಥ್ಥಳಿಪ ತಾಳಿವಜ್ರ ತಾಳಿಚೌಕುಳಿ ।
ಮುತ್ತಿನ ಕುಂಡಲನಿಟ್ಟು ಮೋಹಿಸುತ್ತ ಬೀದಿಯಲ್ಲಿ ।
ಕತ್ತಿಯ ಕೈಯ್ಯಲ್ಲಿ ಪಿಡಿದು ಮತ್ತಲ್ಲೆ ವಿರಾಜಿಸುತ ॥೬॥

ಸಣ್ಣ ಮುತ್ತು ಕೆತ್ತಿಸಿದ ಸಕಲಾತಿಗಳ್ ।
ಹೊನ್ನ ಹೊಸ ಜಾನ ಜಂಗುಳಿ ಹೊಳೆವ ಸೊಬಗಿನ ।
ಉನ್ನಂತ ಪರಾಯಣ ಉತ್ತಮ ರಾಜಶ್ವನೇರಿ ।
ಎನ್ನ ಹಯವದನರಂಗ ಎಲ್ಲರಿಗಿಷ್ಟಾರ್ಥ ಕೊಡುತ ॥೭॥

Read more...

Popular Posts