Pages

ಯಾರಿಗುಂಟು ಯಾರಿಗಿಲ್ಲ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಯಾರಿಗುಂಟು ಯಾರಿಗಿಲ್ಲ
ಬಾಳೆಲ್ಲ ಬೇವು ಬೆಲ್ಲ ।
ಬಂದದೆಲ್ಲ ನೀಸಬೇಕಯ್ಯಾ ಗೆಣೆಯಾ
ಕಾಣದಕ್ಕೆ ಚಿಂತೆ ಯಾಕಯ್ಯಾ
ಗೋಣು ಹಾಕಿ ಕೂಡಬ್ಯಾಡ
ಗತ್ತಿನಾಗೆ ಬಾಳ ನೋಡ ॥

ಏಳು ಬೀಳು ಇರುವುದೇನೇ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪು ಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗಬೇಕಯ್ಯಾ, ಓ ಗೆಣೆಯಾ
ಕೈಯ ಚಲ್ಲಿ ಕೊರಗಬೇಡಯ್ಯಾ॥೧॥

ಪ್ರೀತಿ ಪ್ರೇಮ ನಡೆದಾ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದು ಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯಾ, ಓ ಗೆಣೆಯಾ
ಕಣ್ಣು ತೆರೆದು ಲೋಕ ನೋಡಯ್ಯಾ ॥೨॥

0 comments:

Popular Posts