Pages

ಮೂಡುತ ರವಿ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮೂಡುತ ರವಿ ರಂಗು ತಂದೈತೆ ।
ಓಡುತ ನದಿ ಹಾಡು ನೀಡೈತೆ
ಬೆಟ್ಟದ ಮ್ಯಾಗೆ, ಕಟ್ಟೆಯ ಮ್ಯಾಗೆ, ಗಾಳಿ ತೀಡೈತೆ ॥

ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು ಕಂಪು ಇಂಪು ಒಟ್ಟಿಗೆ ಕೂಡೈತೆ ॥೧॥

ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ ನೋಟದೂಟ ಸಂತೋಷ ಸವಿದೈತೆ ॥೨॥

0 comments:

Popular Posts