Pages

ಚಿತ್ತಾರ ಬಿಡಿಸ್ಯಾವೆ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಚಿತ್ತಾರ ಬಿಡಿಸ್ಯಾವೆ ಮುಂಗಾರ ಮಳೆ ಮೋಡ ।
ಒತ್ತಾಗಿ ಮುಗಿಲಾಗೆ ನಿಂತಾವೆ ಮುತ್ತಾಗೆ
ರೈತಾಪಿ ಹೈದರಿಗೆ ತೆರೆದಾವೆ ಹಾದಿ ನೋಡ ॥

ಬಾಯಿ ಬಿಟ್ಟು ಕಾದೈತೆ ಬೆಂಗಾಡು ಬಿರುಭೂಮಿ
ಕತ್ತೆತ್ತಿ ನೋಡ್ಯಾವೆ ಕಂಗೆಟ್ಟ ಕಾಡುಹಕ್ಕಿ
ಸುತ್ತೆಲ್ಲ ಬಳಲ್ಯಾವೆ ಬಡವಾದ ಎತ್ತು ಎಮ್ಮೆ
ಮೂಡಲ ಸುಳಿಗಾಳಿ ಬಿಡಿಸೈತೆ ಜೀವಭಾವ ॥೧॥

ಗಿಡ ಬಳ್ಳಿ ನಲುಗ್ಯಾವೆ ಹೂರೆಂಬೆ ಬಲು ಬೆಂಡು
ಒಡ್ಡೆಲ್ಲ ಒಣಗ್ಯಾವೆ ನೀರಿರದೆ ತಳವ ಕಂಡು
ಹಾದ್ಯಲ್ಲ ಸುಡುತಾವೆ ಧೂಳನ್ನೆ ಹೊದ್ದುಕೊಂಡು
ನೇಗಿಲ ಹೊನ್ನಾರು ಬಯಸೈತೆ ಮಣ್ಣ ಕಂಡು ॥೨॥

0 comments:

Popular Posts