Pages

शाम-ए-ग़म जब बिखर गयी होगी

Tuesday 27 September 2011

साहित्य - मोहसिन नक़्वी
गायन - ग़ुलाम अली


शाम-ए-ग़म जब बिखर गयी होगी ।
जाने किस किस के घर गयी होगी ॥

इतनी लरज़ाँ न थी चराग़ की लौ ।
अपने साये से डर गई होगी ॥१॥

चांदनी एक शब की मेहमान थी ।
सुबह होते ही मर गयी होगी ॥२॥

देर तक वह ख़फ़ा रहे मुझ से ।
दूर तक ये ख़बर गयी होगी ॥३॥

एक दरिया का रुख़ बदलते ही ।
एक नदी फिर उतर गयी होगी ॥४॥

जिस तरफ़ वो सफ़र पे निकला था ।
सारी रौनक उधर गई होगी ॥५॥

रात सूरज को ढूँढने के लिए ।
ता-बा- हद-ए-सेहर गयी होगी ॥६॥

मेरी यादों की धुप छाओं में ।
उस की सूरत निखर गयी होगी ॥७॥

याँ तालुक न निभ सका उस से ।
याँ तबियत ही भर गयी होगी ॥८॥

तेरी पल भर की दोस्ती ।
उस को बदनाम कर गयी होगी ॥९॥


लरज़ाँ = quiver

Read more...

ಈ ಬಾನು ಈ ಚುಕ್ಕಿ

Thursday 22 September 2011

ಸಾಹಿತ್ಯ-ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
ಸಂಕಲನ - ಭಾವಸಂಗಮ
ಸಂಗೀತ - ಮೈಸೂರು ಅನಂತಸ್ವಾಮಿ
ಗಾಯನ - ಜಯಶ್ರೀ


ಈ ಬಾನು ಈ ಚುಕ್ಕಿ
ಈ ಹೂವು ಈ ಹಕ್ಕಿ ।
ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ ?
ತುದಿ ಮೊದಲು ತಿಳಿಯದೀ ನೀಲಿಯಲಿ ॥

ಒಂದೊಂದು ಹೂವಿಗೂ ಒಂದೊಂದು ಬಣ್ಣ
ಒಂದೊಂದು ಜೀವಕೂ ಒಂದೊಂದು ಕಣ್ಣ
ಯಾವುದೊ ಬಗೆಯಲ್ಲಿ ಎಲ್ಲರಿಗೂ ಅನ್ನ
ಕೊಟ್ಟ ಕರುಣೆಯ ಮೂಲ ಮರೆತಿಹುದು ತನ್ನ ॥೧॥

ನೂರಾರು ನದಿ ಕುಡಿದು ಮೀರದ ಕಡಲು
ಬೋರೆಂದು ಸುರಿಸುರಿದು ಆರದ ಮುಗಿಲು
ಸೇರಿಯು ಕೋಟಿ ತಾರೆ ತುಂಬದ ಬಯಲು
ಯಾರದೀ ಮಾಯೆ ಯಾವ ಬಿಂಬದ ನೆರಳು ? ॥೨॥

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ ?
ಹುಡುಕಿದರೆ ಕೀಲಿ ಕೈ ಸಿಗದೆ ಎದೆ ಯೊಳಗೆ
ತಿಳಿಯದ್ದೆಲ್ಲದರಲ್ಲಿ ಕುಳಿತಿರುವೆ ನೀನೆ ಎನ್ನುವರು
ನನಗೀಗ ಸೋಜಿಗವು ನಾನೆ ! ॥೩॥

Read more...

ನಮ್ಮೂರ ಮಂದಾರ ಹೂವೇ

ಸಾಹಿತ್ಯ-ದೊಡ್ಡರಂಗೇಗೌಡ
ಸಂಗೀತ - ಅಶ್ವಥ್-ವೈದಿ
ಚಿತ್ರ-ಆಲೆಮನೆ


ನಮ್ಮೂರ ಮಂದಾರ ಹೂವೇ ।
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು ॥

ಕಣ್ಣಲ್ಲಿ ಕರೆದು
ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು
ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ
ಸೊಗಸಾದ ಕಾರಂಜಿ ಮಿಡಿದೆ ॥೧॥

ಒಡಲಾಳ ಮೊರೆದು
ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ
ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ
ಇನಿದಾದ ಆನಂದ ತಂದೆ ॥೨॥

Read more...

ಮಾತಾಡೆ ನೀರೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮಾತಾಡೆ ನೀರೆ ಮಾತಾಡೆ ।
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೆ , ಬಳಿಗೆ ಬರಬಾರದೆ ॥

ಸುಮ್ಮನೆ ಇದ್ದರೂ ಕೆಣಕುತ ಬಂದು
ಬಿಮ್ಮನೆ ಕುಳಿತರೂ ಬಳಸುತ ನಿಂದು
ಒಡನಾಡ ಬಂದೋಳು ನೀನಲ್ಲವೆ
ಹರೆಯದ ಸಿರಿ ಮಿಂಚಿ ಮೆರೆವಾಗ
ಹುರಪಿನ ಸಿಹಿ ಹಂಚಿ ಹರಿವಾಗ  ॥೧॥

ಹುಣ್ಣಿಮೆ ಮೂಡಲು ಕಣ್ಣೆವೆ ಕರೆದು
ತಣ್ಣನೆ ಹೊತ್ತಲಿ ನಲ್ಮೆಯ ಮಿಡಿದು
ಜೊತೆಯಾಗಿ ಬೆರೆತೋಳು ನೀನಲ್ಲವೆ
ಒಸಗೆಯ ಬಿಸಿ ತಾಕಿ ನಗುವಾಗ
ಬೆಸುಗೆಯ ಸುಖ ಸಾರ ಸಿಗುವಾಗ ॥೨॥

Read more...

ಮೂಡುತ ರವಿ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮೂಡುತ ರವಿ ರಂಗು ತಂದೈತೆ ।
ಓಡುತ ನದಿ ಹಾಡು ನೀಡೈತೆ
ಬೆಟ್ಟದ ಮ್ಯಾಗೆ, ಕಟ್ಟೆಯ ಮ್ಯಾಗೆ, ಗಾಳಿ ತೀಡೈತೆ ॥

ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು ಕಂಪು ಇಂಪು ಒಟ್ಟಿಗೆ ಕೂಡೈತೆ ॥೧॥

ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ ನೋಟದೂಟ ಸಂತೋಷ ಸವಿದೈತೆ ॥೨॥

Read more...

ಹೂದೋಟದ ಹಾದಿಯಾಗೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಹೂದೋಟದ ಹಾದಿಯಾಗೆ
ಊರಿನಾಚೆ ತೋಪಿನಾಗೆ ।
ತಂಗಾಳಿ ಬೀಸಿದ್ಹಾಂಗೆ
ಹೊಂಬಾಳೆಯು ತೂಗಿದ್ಹಾಂಗೆ
ನಿನ್ನ ಪ್ರೀತಿ ನೆನಪು ತಂದಿತೋ
ನಿಂತಲ್ಲೇ ಕನಸು ಕಂಡಿತೋ
ಬಾಳುವಾಸೆ ಮತ್ತೆ ಉಕ್ಕಿ ಬಂದಿತೋ ॥

ಮಾರಿಹಬ್ಬ ಮಾಡುವಾಗ ದಾರಿ ತಪ್ಪಿ ನಡೆದೆನೆಂದು
ಕೋಪಗೊಂಡು ಕೊಂಕನಾಡಿ ಸ್ನೇಹ ಕದಡಿತೋ
ಬೆಂದು ಹೋದ ಗದ್ದೆಯಾಗೆ ಹೊಸ ಪೈರು ಚಿಗುರಿದ್ಹಾಗೆ
ದಂಡಿ ದಂಡಿ ಆಸೆ ಉಕ್ಕಿ ಹಸಿರು ಮೂಡಿತೋ ॥೧॥

ಘಾಟಿ ಜಾತ್ರೆ ಕೂಡಿದಾಗ ನಿನಗೆ ಎರಡು ಬಗೆದೆನೆಂದು
ಶಾಪ ಹಾಕಿ ದೂರವಾಗಿ ಮನಸು ಒಡೆಯಿತೋ
ಬತ್ತಿಹೋದ ಹಳ್ಳದಾಗೆ ಮತ್ತೆ ನೀರು ಬಂದ ಹಾಗೆ
ಕೊಂಚ ಕೊಂಚ ಮೋಹವುಕ್ಕಿ ಒಸಗೆ ಕರೆಯಿತು ॥೨॥

Read more...

ಮೆರೆಯ ಬೇಡವೋ ಮನುಜ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮೆರೆಯ ಬೇಡವೋ ।
ಮನುಜ, ಅಂತರಾಳದ ಅಂಕೆ ಮೀರಿ
ಕೊಂಕು ಬೀಗಿದೆ, ಸುಂಕ ಕಾದಿದೆ ॥

ನೀತಿ ಮೀರದೆ ನೀನು ಭ್ರಾಂತಿ ಕಾಣದೆ
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ
ಡಂಭಾಚಾರವು ಏಕೊ, ಏಕೋ
ಹುಂಬ ತೋರಿಕೆ ಏಕೋ, ಏಕೋ
ಸಹಜವಾಗಿ ಬಾಳಿ ಬದುಕಯ್ಯ ॥೧॥

ಡೌಲು ತೋರದೆ ಎಂದೂ ಕೇಡು ಹಂಚದೆ
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ
ಪೊಳ್ಳು ಜಂಭವು ಸಾಕೋ, ಸಾಕೋ
ಸುಳ್ಳು ವಂಚನೆ ಸಾಕೋ, ಸಾಕೋ
ಸ್ನೇಹದಿಂದ ಲೋಕ ನೋಡಯ್ಯಾ ॥೨॥

Read more...

ಈ ವಿರಹ ಕಡಲಾಗಿದೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಈ ವಿರಹ ಕಡಲಾಗಿದೆ ।
ನೀನಿರದೆ, ಇನಿದಾದ ಸನಿಹ ಸಿಗದೆ
ಸವಿನೆನಪೇ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ॥

ಕೂಡಿದ ಹಸಿಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ॥೧॥

ಪ್ರೀತಿಯ ಸಿರಿವೀಣೆ ಮೀಟಿದೆ ಈ ಹೃದಯ
ನಿಂತಲ್ಲಿ ಕುಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖಭೋಗ ಬೇಡಿದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ॥೨॥

Read more...

ಗಾಳಿಗೊಡ್ಡಿದ ದೀಪದಂತೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಗಾಳಿಗೊಡ್ಡಿದ ದೀಪದಂತೆ ನಮ್ಮ ಬಾಳುವೆ ।
ಆಗಲೋ ಈಗಲೋ ಆರುವ ತೀರುವ ಬಾಳುವೆ ॥

ಯಾರಿಗು ನಾಳೆ ಹಾದಿ ಹೇಗೋ ಏನೋ ಗೊತ್ತಿಲ್ಲ
ಕಾಲದ ಅಂಕೆ ತಪ್ಪಿ ಯಾರೂ ಎಲ್ಲೂ ಉಳಿದಿಲ್ಲ
ಮುಗಿಯದ ಲೋಕದ ಪಯಣವೆಂದೂ ಬಂಧವೇ ॥೧॥

ರಾಗವು ಗಂಗೆಯಾಗಿ ಹರಿದಂತೆಲ್ಲ ಸಂಗವೇ
ಭೋಗವು ಮೈಯಲ್ಲೂರಿ ಬೆಳೆದಂತೆಲ್ಲ ಕೆಂಡವೇ
ಜಗದೊಳು ನಡೆದಿದೆ ರಾಗ ಭೋಗದ ಆಟವೇ ॥೨॥

Read more...

ಯಾರಿಗುಂಟು ಯಾರಿಗಿಲ್ಲ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಯಾರಿಗುಂಟು ಯಾರಿಗಿಲ್ಲ
ಬಾಳೆಲ್ಲ ಬೇವು ಬೆಲ್ಲ ।
ಬಂದದೆಲ್ಲ ನೀಸಬೇಕಯ್ಯಾ ಗೆಣೆಯಾ
ಕಾಣದಕ್ಕೆ ಚಿಂತೆ ಯಾಕಯ್ಯಾ
ಗೋಣು ಹಾಕಿ ಕೂಡಬ್ಯಾಡ
ಗತ್ತಿನಾಗೆ ಬಾಳ ನೋಡ ॥

ಏಳು ಬೀಳು ಇರುವುದೇನೇ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪು ಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗಬೇಕಯ್ಯಾ, ಓ ಗೆಣೆಯಾ
ಕೈಯ ಚಲ್ಲಿ ಕೊರಗಬೇಡಯ್ಯಾ॥೧॥

ಪ್ರೀತಿ ಪ್ರೇಮ ನಡೆದಾ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದು ಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯಾ, ಓ ಗೆಣೆಯಾ
ಕಣ್ಣು ತೆರೆದು ಲೋಕ ನೋಡಯ್ಯಾ ॥೨॥

Read more...

ಮುಂಜಾನೆ ಮಂಜೆಲ್ಲ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮುಂಜಾನೆ ಮಂಜೆಲ್ಲ ಚಂದಾಗೈತೆ ।
ಸಂಗಾತಿ ತುಟಿಯಂಗೆ
ಹವಳಾದ ಮಣಿಯಂಗೆ
ಹೊಳಪಾಗೈತೆ ॥

ಸಂಪಿಗೆ ತೂಗಿ ಚೆಂಡ್ಹೂವು ಬಾಗಿ
ನೇಸರ ನಗೆಸಾರ ಶುರುವಾಗೈತೆ
ಸೂಲಂಗಿ ತೆನೆಗೆ ಬಾಳೆಲೆ ಗೊನೆಗೆ
ತಂಗಾಳಿ ಸುಳಿದಾಡಿ ಹಾಡಾಗೈತೆ
ಕಣ್ಣಾಗಿ ಸಂಗಾತಿ ಕುಣಿದಂಗೈತೆ ॥೧॥

ಮೋಡದ ದಂಡು ಓಡೋದ ಕಂಡು
ರಂಗೋಲಿ ವೈನಾಗಿ ಬರೆದಂಗೈತೆ
ಆಕಾಶದ ಬದಿಗೆ ಗುಡ್ಡದ ತುದಿಗೆ
ಹೊಂಬಿಸಿಲು ರಂಗಾಗಿ ಬೆಳಕಾಗೈತೆ
ಮೈದುಂಬಿ ಮನಸೋತು ಮೆರದಂಗೈತೆ ॥೨॥

Read more...

ಸುಗ್ಗಿ ವ್ಯಾಳೆಗೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಸುಗ್ಗಿ ವ್ಯಾಳೆಗೆ ।
ಸೊಬಗೇ ಸುತ್ತ ಕಂಡು ಭೂಮಿ ಬೀಗೈತೆ
ಬವಣೆ ನೀಗೈತೆ ॥

ರಾಗಿ ಹೊಲಗಳು ತೂಗುವ ಹೊನಪಿಗೆ ಬೆಡಗೇ ಮಿಂಚೈತೆ
ಹುಚ್ಚೆಳ್ಳು ಸಾಸಿವೆ ಅವರೆ ಸೊಗಡು ಕಂಪು ಹರಡೈತೆ
ಕಡಲೆ ಕಬ್ಪು ಹೋಬಾಗಿ ಬೆಳೆದು ರಾಶಿ ಬಿದ್ದೈತೆ
ಜೋಳ ನವಣೆ ಹುರುಳಿ ತೊಗರಿ ಕಣ್ಣು ಚುಚ್ಚೈತೆ ॥೧॥

ವರುಷ ಪೂರ ದುಡಿದ ಜನಕೆ ಫಸಲು ದಕ್ಕೈತೆ
ಕೇಕೆ ಹಾಕೋ ರೈತರಂಗಿಗೆ ರಾಗ ಉಕ್ಕೈತೆ
ಹಸಿರು ಬಯಸೋ ರಾಸುಗಳಿಗೆ ಮೇವು ಸಿಕ್ಕೈತೆ
ಕಾಳು ಕಡ್ಡಿ ಹುಡುಕೋ ಹಕ್ಕಿಗೆ ಹಸಿವು ತಣಿದೈತೆ ॥೨॥

Read more...

ಚಿತ್ತಾರ ಬಿಡಿಸ್ಯಾವೆ

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಚಿತ್ತಾರ ಬಿಡಿಸ್ಯಾವೆ ಮುಂಗಾರ ಮಳೆ ಮೋಡ ।
ಒತ್ತಾಗಿ ಮುಗಿಲಾಗೆ ನಿಂತಾವೆ ಮುತ್ತಾಗೆ
ರೈತಾಪಿ ಹೈದರಿಗೆ ತೆರೆದಾವೆ ಹಾದಿ ನೋಡ ॥

ಬಾಯಿ ಬಿಟ್ಟು ಕಾದೈತೆ ಬೆಂಗಾಡು ಬಿರುಭೂಮಿ
ಕತ್ತೆತ್ತಿ ನೋಡ್ಯಾವೆ ಕಂಗೆಟ್ಟ ಕಾಡುಹಕ್ಕಿ
ಸುತ್ತೆಲ್ಲ ಬಳಲ್ಯಾವೆ ಬಡವಾದ ಎತ್ತು ಎಮ್ಮೆ
ಮೂಡಲ ಸುಳಿಗಾಳಿ ಬಿಡಿಸೈತೆ ಜೀವಭಾವ ॥೧॥

ಗಿಡ ಬಳ್ಳಿ ನಲುಗ್ಯಾವೆ ಹೂರೆಂಬೆ ಬಲು ಬೆಂಡು
ಒಡ್ಡೆಲ್ಲ ಒಣಗ್ಯಾವೆ ನೀರಿರದೆ ತಳವ ಕಂಡು
ಹಾದ್ಯಲ್ಲ ಸುಡುತಾವೆ ಧೂಳನ್ನೆ ಹೊದ್ದುಕೊಂಡು
ನೇಗಿಲ ಹೊನ್ನಾರು ಬಯಸೈತೆ ಮಣ್ಣ ಕಂಡು ॥೨॥

Read more...

ಎಂತ ಮರುಳಯ್ಯ

ಸಾಹಿತ್ಯ-ಲಕ್ಷ್ಮಿನಾರಾಯಣ ಭಟ್ಟ
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ
ಚಿತ್ರ-ಸ್ಪಂದನ


ಎಂತ ಮರುಳಯ್ಯ ಇದು ಎಂತ ಮರುಳು।
ಬೆಳಗಿನ ಹಿಮದಂತೆ ಹರಿವ ನೆರಳು
ತಳತಳ ಮಿನುಗಿ ಸೋಕಲು ಕರಗಿ
ಹರಿವುದು ಈ ಬಾಳಿನೆಲ್ಲ ತಿರುಳು ॥

ಹರಿಯುವ ನೀರಿಗೆ ಯಾವ ಹೊಣೆ
ಹಾರುವ ಹಕ್ಕಿಗೆ ಎಲ್ಲಿ ಮನೆ
ಬಾಳಿನ ಕಡಲಿನ ತೆರೆಗಳ ಸೀಳಿ
ತಲಪುವುದಾಚೆಯ ದಡದ ಕೊನೆ ॥೧॥

ಸಂಜೆಯ ನೇಸರ ಬಣ್ಣದ ನೀಲಿ
ನೀರಲಿ ಹಾರುತ ಬೆಳ್ಳಕ್ಕಿ ತೇಲಿ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಡೆ
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ ॥೨॥

Read more...

ಕಾಡು ಕುದುರೀ

Tuesday 20 September 2011

ಸಾಹಿತ್ಯ-ಚಂದ್ರಶೇಖರ ಕಂಬಾರ
ಸಂಗೀತ - ಚಂದ್ರಶೇಖರ ಕಂಬಾರ
ಗಾಯನ - ಶಿವಮೊಗ್ಗ ಸುಬ್ಬಣ್ಣ, ಕಲ್ಪನಾ ಶಿರೂರ
ಚಿತ್ರ-ಕಾಡುಕುದುರೆ


ಕಾಡು ಕುದುರೀ ಓಡಿ ಬಂದಿತ್ತऽ ॥

ಊರಿನಾಚೆ ದೂರದಾರಿ ಸುರುವಾಗऽ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಟ್ಟऽ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತऽ ॥೧॥

ಮೈಯ್ಯ ಬೆಂಕಿ ಮಿರುಗತಿತ್ತऽ ಬ್ಯಾಸ್ಗಿ ಬಿಸಿಲऽ ಉಸಿರಾಡಿತ್ತऽ
ಹೊತ್ತಿ ಉರಿಯೊ ಕೇಶರಾಶಿ ಕತ್ತಿನಾಗ ಕುಣೀತಿತ್ತऽ
ಧೂಮಕೇತು ಹಿಂಬಾಲಿತ್ತऽ ಹೌಹಾರಿತ್ತऽ ಹರಿದಾಡಿತ್ತऽ ಹೈಹೈ ಅಂತ ಹಾರಿಬಂದಿತ್ತऽ ॥೨॥

ಕಣ್ಣಿನಾಗ ಸಣ್ಣ ಖಡ್ಗ ಆಸುಪಾಸು ಝಳಪಿಸಿತ್ತऽ
ಬೆನ್ನ ಹುರಿ ಬಿಗಿದಿತ್ತಣ್ಣ ಸೊಂಟದ ಬುಗುರಿ ತಿರಗತಿತ್ತऽ
ಬಿಗಿದ ಕಾಡಬಿಲ್ಲಿನಿಂದ ಬಿಟ್ಟ ಬಾಣದ್ಹಾಂಗ ಚಿಮ್ಮಿ ಹದ್ದऽ ಮೀರಿ ಹಾರಿ ಬಂದಿತ್ತऽ ॥೩॥

ನೆಲ ಒದ್ದು ಗುದ್ದऽ ತೋಡಿ ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು ಏಳಕೊಳ್ಳ ತಿಳ್ಳೆಳಾಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತऽ ॥೪॥

Read more...

ಹರಿಚಿತ್ತ ಸತ್ಯ

Thursday 1 September 2011

ಸಾಹಿತ್ಯ-ಪುರಂದರದಾಸ


ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ।
ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು॥

ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ ।
ಮದುವ್ಯಾಗದಿರುವದು ಹರಿಚಿತ್ತವು ।
ಕುದುರೆ ಅಂದಣ ಆನೆ ಬಯಸೋದು ನರಚಿತ್ತ ।
ಪಾದಚಾರಿಯಾಗೋದು ಹರಿಚಿತ್ತವಯ್ಯ ॥೧॥

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ ।
ಒದಗಿ ಬರುವ ರೋಗ ಹರಿಚಿತ್ತವು ।
ಸದಾ ಅನ್ನದಾನವ  ಬಯಸೋದು ನರಚಿತ್ತ।
ಉದರಕ್ಕೆ ಅಳುವುದು ಹರಿಚಿತ್ತವಯ್ಯ ॥೨॥

ಧರಣಿಯನಾಳಬೇಕೆಂಬುದು ನರಚಿತ್ತ ।
ಪರರ ಸೇವಿಸುವುದು ಹರಿಚಿತ್ತವು ।
ಪುರಂದರವಿಠಲನ ಬಯಸೋದು ನರಚಿತ್ತ ।
ದುರಿತವ ಕಳೆವುದೆ ಹರಿಚಿತ್ತವಯ್ಯ॥೩॥

Read more...

Popular Posts