Pages

ಮಾತಾಡೆ ನೀರೆ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮಾತಾಡೆ ನೀರೆ ಮಾತಾಡೆ ।
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೆ , ಬಳಿಗೆ ಬರಬಾರದೆ ॥

ಸುಮ್ಮನೆ ಇದ್ದರೂ ಕೆಣಕುತ ಬಂದು
ಬಿಮ್ಮನೆ ಕುಳಿತರೂ ಬಳಸುತ ನಿಂದು
ಒಡನಾಡ ಬಂದೋಳು ನೀನಲ್ಲವೆ
ಹರೆಯದ ಸಿರಿ ಮಿಂಚಿ ಮೆರೆವಾಗ
ಹುರಪಿನ ಸಿಹಿ ಹಂಚಿ ಹರಿವಾಗ  ॥೧॥

ಹುಣ್ಣಿಮೆ ಮೂಡಲು ಕಣ್ಣೆವೆ ಕರೆದು
ತಣ್ಣನೆ ಹೊತ್ತಲಿ ನಲ್ಮೆಯ ಮಿಡಿದು
ಜೊತೆಯಾಗಿ ಬೆರೆತೋಳು ನೀನಲ್ಲವೆ
ಒಸಗೆಯ ಬಿಸಿ ತಾಕಿ ನಗುವಾಗ
ಬೆಸುಗೆಯ ಸುಖ ಸಾರ ಸಿಗುವಾಗ ॥೨॥

0 comments:

Popular Posts