Pages

ಮೆರೆಯ ಬೇಡವೋ ಮನುಜ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಮೆರೆಯ ಬೇಡವೋ ।
ಮನುಜ, ಅಂತರಾಳದ ಅಂಕೆ ಮೀರಿ
ಕೊಂಕು ಬೀಗಿದೆ, ಸುಂಕ ಕಾದಿದೆ ॥

ನೀತಿ ಮೀರದೆ ನೀನು ಭ್ರಾಂತಿ ಕಾಣದೆ
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ
ಡಂಭಾಚಾರವು ಏಕೊ, ಏಕೋ
ಹುಂಬ ತೋರಿಕೆ ಏಕೋ, ಏಕೋ
ಸಹಜವಾಗಿ ಬಾಳಿ ಬದುಕಯ್ಯ ॥೧॥

ಡೌಲು ತೋರದೆ ಎಂದೂ ಕೇಡು ಹಂಚದೆ
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ
ಪೊಳ್ಳು ಜಂಭವು ಸಾಕೋ, ಸಾಕೋ
ಸುಳ್ಳು ವಂಚನೆ ಸಾಕೋ, ಸಾಕೋ
ಸ್ನೇಹದಿಂದ ಲೋಕ ನೋಡಯ್ಯಾ ॥೨॥

0 comments:

Popular Posts