Pages

ಸುಗ್ಗಿ ವ್ಯಾಳೆಗೆ

Thursday 22 September 2011

ಸಾಹಿತ್ಯ-ದೊಡ್ಡರಂಗೇಗೌಡ
ಸಂಕಲನ - ಮಾವು-ಬೇವು
ಸಂಗೀತ - ಸಿ.ಅಶ್ವಥ್
ಗಾಯನ - ಎಸ್.ಪಿ.ಬಾಲಸುಬ್ರಮಣ್ಯಂ


ಸುಗ್ಗಿ ವ್ಯಾಳೆಗೆ ।
ಸೊಬಗೇ ಸುತ್ತ ಕಂಡು ಭೂಮಿ ಬೀಗೈತೆ
ಬವಣೆ ನೀಗೈತೆ ॥

ರಾಗಿ ಹೊಲಗಳು ತೂಗುವ ಹೊನಪಿಗೆ ಬೆಡಗೇ ಮಿಂಚೈತೆ
ಹುಚ್ಚೆಳ್ಳು ಸಾಸಿವೆ ಅವರೆ ಸೊಗಡು ಕಂಪು ಹರಡೈತೆ
ಕಡಲೆ ಕಬ್ಪು ಹೋಬಾಗಿ ಬೆಳೆದು ರಾಶಿ ಬಿದ್ದೈತೆ
ಜೋಳ ನವಣೆ ಹುರುಳಿ ತೊಗರಿ ಕಣ್ಣು ಚುಚ್ಚೈತೆ ॥೧॥

ವರುಷ ಪೂರ ದುಡಿದ ಜನಕೆ ಫಸಲು ದಕ್ಕೈತೆ
ಕೇಕೆ ಹಾಕೋ ರೈತರಂಗಿಗೆ ರಾಗ ಉಕ್ಕೈತೆ
ಹಸಿರು ಬಯಸೋ ರಾಸುಗಳಿಗೆ ಮೇವು ಸಿಕ್ಕೈತೆ
ಕಾಳು ಕಡ್ಡಿ ಹುಡುಕೋ ಹಕ್ಕಿಗೆ ಹಸಿವು ತಣಿದೈತೆ ॥೨॥

0 comments:

Popular Posts