Pages

Showing posts with label ವಿಜಯದಾಸ. Show all posts
Showing posts with label ವಿಜಯದಾಸ. Show all posts

ಭಕುತ ಜನ ಮುಂದೆ ನೀನವರ ಹಿಂದೆ

Sunday, 8 October 2017

ಸಾಹಿತ್ಯ-ವಿಜಯದಾಸ


ಭಕುತ ಜನ ಮುಂದೆ ನೀನವರ ಹಿಂದೆ।
ಯುಕುತಿ ಕೈಗೊಳ್ಳದೋ ಗಯಾ ಗದಾಧರನೆ ॥

ಕಟ್ಟೆರಡು ಬಿಗಿದು ನದಿ ಸೂಸಿ ಹರಿಯುತಿರೆ,
ಕಟ್ಟಳೆಯಲಿ ಹರಿಗೋಲು ಹಾಕಿ ।
ನೆಟ್ಟನೆ ಆಚೆ ಈಚೆಗೆ ಹೋಗಿ ಬರುವಾಗ,
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೇ ? ॥೧॥

ಕಾಳೆ ಹೆಗ್ಗಾಳೆ ದುಂದುಭಿ ಭೇರಿ ತಮಟೆ,
ನಿಸ್ಸಾಳೆ ನಾನಾವಾದ್ಯ ಘೋಷಣೆಗಳು ।
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ,
ಆಳು ಮುಂದಲ್ಲದೆ ಅರಸು ತಾ ಮುಂದೇ ? ॥೨॥

ಉತ್ಸವ ವಾಹನದಿ ಬೀದಿಯೊಳು ಮೆರೆಯುತಿರೆ,
ಸತ್ಸಂಗತಿಗೆ ಹರಿದಾಸರೆಲ್ಲ ।
ವತ್ಸಲ ಸಿರಿವಿಜಯವಿಠ್ಠಲ ವೆಂಕಟಾಧೀಶ,
ವತ್ಸ ಮುಂದಲ್ಲದೆ ಧೇನು ತಾ ಮುಂದೇ ? ॥೩॥

Read more...

ಕೈಲಾಸವಾಸ ಗೌರೀಶ ಈಶ

Tuesday, 1 March 2016

ಸಾಹಿತ್ಯ-ವಿಜಯದಾಸ


ಕೈಲಾಸವಾಸ ಗೌರೀಶ ಈಶ ।
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ ॥

ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ ।
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣುಭಕುತಿಯನು ಕೊಡು ಶಂಭೋ ॥೧॥

ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ ।
ಧನುಜಗತಮದಹಾರಿ ದಂಡಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನಚರಣಕಮಲದಲ್ಲಿ ಶಂಭೋ ॥೨॥

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ ।
ಭಾಗವತಗಳ ಪ್ರಿಯ ವಿಜಯವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ ॥೩॥

Read more...

ಪವಮಾನ ಪವಮಾನ ಜಗದ ಪ್ರಾಣ

ಸಾಹಿತ್ಯ-ವಿಜಯದಾಸ


ಪವಮಾನ ಪವಮಾನ ಜಗದ ಪ್ರಾಣ
ಸಂಕರುಷಣ ಭವಭಯಾರಣ್ಯದಹನ ।
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರಿಯ ॥

ಹೇಮಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿವರ್ಗರಹಿತ
ವ್ಯೋಮಾದಿಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ।
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರಮತಿಯನು ನೀ ಮಾಣಿಪುದು ॥೧॥

ವಜ್ರಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರಮಣಿ ದಯಾಪಾರ ವಾರ ಉದಾರ ಸಜ್ಜನರಘಪರಿಹಾರ ।
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ
ಮಾರ್ಜನದಲಿ ಭವವರ್ಜಿತನೆನಿಸೊ ॥೨॥

ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದಭಾರತಿರಮಣ
ನೀನೆ ಶರ್ವಾದಿಗೀರ್ವಾಣಾದ್ಯಮರರಿಗೆ ಜ್ಞಾನಧನಪಾಲಿಪವರೇಣ್ಯ ।
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿಕೊಡುವದು ಭಾನುಪ್ರಕಾಶ ॥೩॥

Read more...

ಸದಾ ಎನ್ನ ಹೃದಯದಲ್ಲಿ

ಸಾಹಿತ್ಯ-ವಿಜಯದಾಸ


ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀಹರಿ ।
ನಾದಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ ॥

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ ।
ವೇಣುಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ॥೧॥

ಭಕ್ತಿರಸವೆಂಬೋ ಮುತ್ತುಮಾಣಿಕ್ಯದ ಹರಿವಾಣದಿ ।
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೋ ॥೨॥

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ।
ಘನ ಮಹಿಮ ವಿಜಯವಿಠಲ ನಿನ್ನ ಭಕುತರ ಕೇಳೋ ಸೊಲ್ಲ ॥೩॥


Pandit Bhimsen Joshi performs :

Read more...

Popular Posts