Pages

Showing posts with label ಆನಂದದಾಸ. Show all posts
Showing posts with label ಆನಂದದಾಸ. Show all posts

ನಾನೇನು ಕೊಡಲಿ ನಾಗಶಯನನಿಗೆ

Wednesday, 11 November 2020

ಸಾಹಿತ್ಯ-ಆನಂದದಾಸ


ನಾನೇನು ಕೊಡಲಿ ನಾಗಶಯನನಿಗೆ ।
ಹದಿನಾಲ್ಕು ಲೋಕಗಳ ಆಳುವೋ ಅರಸಗೆ ॥

ಸರ್ಪಶಯನನಿಗೆ ಸರ್ಪವೇಣಿಯ ಕೊಟ್ಟ ಸಾಗರರಾಜನು ಧನ್ಯನಾದನು ।
ಸಾಸಿರನಾಮದ ಶ್ರೀರಾಮಚಂದ್ರಗೆ ಸ್ವಾದಿಷ್ಟ ಫಲ ಕೊಟ್ಟ ಶಬರಿ ಧನ್ಯಳು ॥೧॥

ಆದಿಮೂರುತಿಗೆ ಅಕಳಂಕಚರಿತಗೆ ಅವಲಕ್ಕಿಯನು ಕೊಟ್ಟ ಅಣ್ಣ ಸುದಾಮನು ।
ಅವನೇ ತನ್ನವನೆಂದು ಅರಳು ಮಲ್ಲಿಗೆ ಕೊಟ್ಟ ಅಬಲೆ ರಾಧೆಯು ಅತಿ ಧನ್ಯಳು ॥೨॥

ಅಸುರಸಂಹಾರಗೆ ಎಸೆಳ್ಹಸು ಕೂಸಿಗೆ ಹಾಲು ಕೊಟ್ಟ ಯಶೋದೆ ಧನ್ಯಳು ।
ಕಮಲೇಶ ಕೃಷ್ಣಗೆ ಹೃತ್ಕಮಲವ ಕೊಟ್ಟ ಕಮಲಾಸನೆಯು ಅತಿ ಧನ್ಯಳು ॥೩॥

Read more...

ಕರೆದರೆ ಬರಬಾರದೆ

Saturday, 2 March 2019

ಸಾಹಿತ್ಯ-ಆನಂದದಾಸ


ಕರೆದರೆ ಬರಬಾರದೆ ।
ವರಮಂತ್ರಾಲಯ ಪುರಮಂದಿರ ತವಚರಣಸೇವಕರು ಕರೆದಿರಲು ॥

ಹರಿದಾಸರು ಸುಸ್ವರ ಸಮ್ಮೇಳದಿ ।
ಪರವಶದಿ ಬಾಯ್ತೆರೆದು ಕೂಗಿರೆ ॥೧॥

ಪೂಶರಪಿತ ಕಮಲೇಶವಿಠಲನ ।
ದಾಸಾಗ್ರೇಸರು ಈ ಸಮಯದಲಿ ॥೨॥

Read more...

Popular Posts