Pages

ಹಣ್ಣು ಮಾರುವವನ ಹಾಡು

Friday 5 March 2010

ಸಾಹಿತ್ಯ-ಕಯ್ಯಾರ ಕಿಜ್ಞಣ್ಣ ರೈ


ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ,
ಬೀದರ ಜಿಲ್ಲೆಯ ಸೀಬೆಯ ಹಣ್ಣು, ಬೆಂಗಳೂರಿನ ಸೇಬಿನ ಹಣ್ಣು,
ಕೊಳ್ಳಿರಿ ಹಿಗ್ಗನು ಹರಿಸುವವು, ಕಲ್ಲುಸಕ್ಕರೆಯ ಮರೆಸುವವು ॥೧॥

ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ,
ಬೆಳಗಾವಿಯ ಸವಿ ಸಪೋಟ, ದೇವನಹಳ್ಳಿಯ ಚಕ್ಕೋತ,
ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು ॥೨॥

ಗಂಜಾಮ್ ಅಂಜೀರ್, ತುಮಕೂರ ಹಲಸು,
ಧಾರವಾಡದ ಆಪೂಸು, ಮಲೆನಾಡಿನ ಅನಾನಸು,
ಸವಿಯಿರಿ ಬಗೆಬಗೆ ಹಣ್ಣುಗಳ, ಕನ್ನಡ ನಾಡಿನ ಹಣ್ಣುಗಳ॥೩॥

2 comments:

Harsha D P said...

This is from the poet kaiyaara kinyanna rai. ಕಯ್ಯಾರ ಕಿಜ್ಞಣ್ಣ ರೈ.

Shree said...

Thank you. I have now updated the post.

Popular Posts