Pages

सगरी रैन मोहे

Friday, 16 November 2018

राग - गौड़ सारंग
ताल - द्रुत तीनताल


स्थायी
सगरी रैन मोहे तड़पत दय्या,
एक घड़ी पलछिन ना कर सैंय्या ॥

अंतरा
जब से गये मोरी सारी उमरिया,
तब ते रीत पीत कछु कछु कम भयी,
ऐसो मोहे पलपित ना कर सैंय्या॥

Read more...

सैंय्या मैं नू रतड़ी

राग - गौड़ सारंग
ताल - विलंबित एकताल


स्थायी
सैंय्या मैं नू रतड़ी वे जमायिये ॥

अंतरा
हाथन मेहन्दी पाँऊन मेहन्दी लगी,
चूड़ी भायो कलायिया॥

Read more...

ಕಾಯಬೇಕೆನ್ನ ಗೋಪಾಲ

Friday, 20 July 2018

ಸಾಹಿತ್ಯ-ಪುರಂದರದಾಸ


ಕಾಯಬೇಕೆನ್ನ ಗೋಪಾಲ ।
ಒಂದುಪಾಯವನರಿಯೆನು ಭಕುತರ ಪಾಲ ॥

ಹಲವು ಜನ್ಮಗಳೆತ್ತಿ ಬಂದೆ,
ಮಾಯಾಬಲವೆಂಬುದರಯದೆ ಭವದೊಳು ನೊಂದೆ ।
ಬಲು ಭಯವಾಯಿತು ಮುಂದೆ,
ನೀನು ಸುಲಭನೆಂದು ಕೇಳಿ ಶರಣೆಂದೆ ತಂದೆ ॥೧॥

ವಿತ್ತದಳಗೆ ಮನವಿಟ್ಟು,
ನಿನ್ನ ಉತ್ತಮನಾಮದ ಸ್ಮರಣೆಯ ಬಿಟ್ಟು ।
ಮತ್ತನಾದೆ ಮತಿಗೆಟ್ಟು,
ಇದ ಚಿತ್ತದಲಿ ತಿಳಿದು ಬಲು ದಯವಿಟ್ಟು ॥೨॥

ಉರುತರ ಪಾಪಂಗಳೆಲ್ಲ,
ಅನ್ಯ ನರರೇನ ಬಲ್ಲರು ಯಮಧರ್ಮ ಬಲ್ಲ ।
ನರಕಕ್ಕೆ ಒಳಗಾದೆನಲ್ಲ,
ಸಿರಿವರ ನಾರಾಯಣ ಪುರಂದರ ವಿಠ್ಠಲ ॥೩॥

Read more...

सुघर बर पाया

Wednesday, 11 July 2018

रचना - जगन्नाथबुआ पुरोहित 'गुनिदास'
राग - जोगकौंस
ताल - विलंबित तीनताल


स्थायी
सुघर बर पाया,
नीके बनीके इन भागन के आगे ॥

अंतरा
औलिया अंबीया गौस कुतुब सब,
इन नबीजीके सिर छत धरो॥

Read more...

जोगकौंस - पीर परायी

रचना - जगन्नाथबुआ पुरोहित 'गुनिदास'
राग - जोगकौंस
ताल - द्रुत तीनताल


स्थायी
पीर परायी, जानी नहीं बालमवा ॥

अंतरा
प्राणपिया तुम ऐसे निठूर भये,
'गुनीदास' की सारी आस गमायी॥

Read more...

ಕರವ ಮುಗಿವೆ ಕಮಲನಯನ

Monday, 4 June 2018

ಸಾಹಿತ್ಯ-ಗೋವಿಂದಾಸ


ಕರವ ಮುಗಿವೆ ಕಮಲನಯನ ಕರುಣದಿಂದಲಿ ಪಾಲಿಸೋ ।
ಕರಿವರದ ಶ್ರೀಕಮಲನಾಭ ಕರೆದು ಎನ್ನನು ಮನ್ನಿಸೋ ॥

ಸ್ಮರಿಲರಿಯೆ ಸಿರಿಯರಮಣ ಪರಮಪಾವನ ಪಾದವ ।
ಸ್ಮರಣಜನಕ ಶರಧಿಶಯನ ಇರಿಸು ಎನ್ನೊಳು ಮೋಹವ ॥೧॥

ಬಂಧುಬಳಗ ಭೋಗಭಾಗ್ಯದಿಂದ ಸುಖವ ಕಾಣೆನೆ ।
ಬಂದ ಶೋಕ ಶಮನನೇ ಗೋವಿಂದದಾಸನ ಪ್ರಾಣನೇ ॥೨॥

Read more...

ನಂಬರು ನೆಚ್ಚರು

Sunday, 27 May 2018

ಸಾಹಿತ್ಯ-ಬಸವಣ್ಣ


ನಂಬರು ನೆಚ್ಚರು ಬರಿದೆ ಕರೆವರು ।
ನಂಬಲರಿಯರೀ ಲೋಕದ ಮನುಜರು ॥
ನಂಬಿ ಕರೆದಡೆ ಓ ಎನ್ನನೆ ಶಿವನು? ।
ನಂಬದೆ ನೆಚ್ಚದೆ ಬರಿದೆ ಕರೆವರ ।
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ ॥೧॥



Read more...

ನಾನು ನೀನು ಎನ್ನದಿರು

Sunday, 20 May 2018

ಸಾಹಿತ್ಯ-ಕನಕದಾಸ


ನಾನು ನೀನು ಎನ್ನದಿರು ಹೀನ ಮಾನವ ।
ಜ್ಞಾನದಿಂದ ನಿನ್ನ ನೀನೇ ತಿಳಿದು ನೋಡೆಲೋ, ಪ್ರಾಣಿ ॥

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೋ ।
ಅನ್ನದಿಂದ ಬಂದ ಕಾಮ ನಿನ್ನದೇನೆಲೋ ।
ಕರ್ಣದಿಂದ ಬರುವ ಘೋಷ ನಿನ್ನದೇನೆಲೋ ।
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೋ, ಪ್ರಾಣಿ ॥೧॥

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ ।
ಜಾಲವಿದ್ಯೆ ಬಯಲು ಮಾಯೆ ನಿನ್ನದೇನೆಲೋ ।
ಕೀಲು ಜಡಿದ ಮರದ ಗೊಂಬೆ ನಿನ್ನದೇನೆಲೋ ।
ಲೋಲ ಆದಿಕೇಶವನ ಭಕ್ತನಾಗೆಲೋ ಪ್ರಾಣಿ ॥೨॥

Read more...

ಕೇಳನೋ ಹರಿ ತಾಳನೋ

Thursday, 10 May 2018

ಸಾಹಿತ್ಯ-ಪುರಂದರದಾಸ


ಕೇಳನೋ ಹರಿ ತಾಳನೋ ।
ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ॥

ತಂಬೂರಿ ಮೊದಲಾದ ಅಖಿಲವಾದ್ಯಗಳಿದ್ದು,
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ,
ನಂಬಲಾರ ಈ ಡಂಭಕರ ಕೂಗಾಟ ॥೧॥

ನಾನಾಬಗೆಯ ರಾಗ ಭಾವ ತಿಳಿದು,
ಸ್ವರಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ,
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು ॥೨॥

ಅಡಿಗಡಿಗಾನಂದಭಾಷ್ಪ ಪುಳಕದಿಂದ,
ನಡೆನುಡಿಗೆ ಶ್ರೀಹರಿ ಎನ್ನುತ
ದೃಢಭಕ್ತರೊಡಗೂಡಿ ಹರಿಕೀರ್ತನೆಯ ಪಾಡಿ,
ಕಡೆಗೆ ಪುರಂದರವಿಠಲ ಎಂದರೆ ಕೇಳ್ವ ॥೩॥

Read more...

ಗಜವದನ ಬೇಡುವೆ

Thursday, 19 April 2018

ಸಾಹಿತ್ಯ-ಪುರಂದರದಾಸ


ಗಜವದನ ಬೇಡುವೆ, ಗೌರಿ ತನಯ ।
ತ್ರಿಜಗವಂದಿತನೇ ಸುಜನರ ಪೊರೆವನೇ ॥

ಪಾಶಾಂಕುಶಧರ ಪರಮ ಪವಿತ್ರ ।
ಮೂಷಿಕವಾಹನ ಮುನಿಜನಪ್ರೇಮ ॥೧॥

ಮೋದದಿ ನಿನ್ನಯ ಪಾದವ ತೋರೋ,
ಸಾಧುವಂದಿತನೇ ಆದರದಿಂದಲಿ ।
ಸರಸಿಜನಾಭ ಶ್ರೀಪುರಂದರವಿಠಲನ,
ನಿರುತದಿ ನೆನೆವಂತೆ ನೀ ದಯಮಾಡೋ ॥೨॥

Read more...

Popular Posts