Pages

ಕಾಯಬೇಕೆನ್ನ ಗೋಪಾಲ

Friday 20 July 2018

ಸಾಹಿತ್ಯ-ಪುರಂದರದಾಸ


ಕಾಯಬೇಕೆನ್ನ ಗೋಪಾಲ ।
ಒಂದುಪಾಯವನರಿಯೆನು ಭಕುತರ ಪಾಲ ॥

ಹಲವು ಜನ್ಮಗಳೆತ್ತಿ ಬಂದೆ,
ಮಾಯಾಬಲವೆಂಬುದರಯದೆ ಭವದೊಳು ನೊಂದೆ ।
ಬಲು ಭಯವಾಯಿತು ಮುಂದೆ,
ನೀನು ಸುಲಭನೆಂದು ಕೇಳಿ ಶರಣೆಂದೆ ತಂದೆ ॥೧॥

ವಿತ್ತದಳಗೆ ಮನವಿಟ್ಟು,
ನಿನ್ನ ಉತ್ತಮನಾಮದ ಸ್ಮರಣೆಯ ಬಿಟ್ಟು ।
ಮತ್ತನಾದೆ ಮತಿಗೆಟ್ಟು,
ಇದ ಚಿತ್ತದಲಿ ತಿಳಿದು ಬಲು ದಯವಿಟ್ಟು ॥೨॥

ಉರುತರ ಪಾಪಂಗಳೆಲ್ಲ,
ಅನ್ಯ ನರರೇನ ಬಲ್ಲರು ಯಮಧರ್ಮ ಬಲ್ಲ ।
ನರಕಕ್ಕೆ ಒಳಗಾದೆನಲ್ಲ,
ಸಿರಿವರ ನಾರಾಯಣ ಪುರಂದರ ವಿಠ್ಠಲ ॥೩॥

0 comments:

Popular Posts