Pages

ನೀನೇ ದಯಾಳೋ ನಿರ್ಮಲಚಿತ್ತ ಗೋವಿಂದ

Monday, 15 February 2016

ಸಾಹಿತ್ಯ-ಪುರಂದರದಾಸ


ನೀನೇ ದಯಾಳೋ ನಿರ್ಮಲಚಿತ್ತ ಗೋವಿಂದ, ನಿಗಮಗೋಚರ ಮುಕುಂದ ।
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು, ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ॥

ದಾನವಾಂತಕ ದೀನಜನಮಂದಾರನೆ, ಧ್ಯಾನಿಪರ ಮನಸಂಚಾರನೆ ।
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ, ಸಾನುರಾಗದಿ ಕಾಯೋ ಸನಕಾದಿವಂದ್ಯನೆ ॥೧॥

ಬಗೆಬಗೆಯಲಿ ನಿನ್ನ ಸ್ತುತಿಪೆನೋ ನಗಧರ, ಖಗಪತಿವಾಹನನೆ ।
ಮಗುವಿನ ಮಾತೆಂದು ನಗುತ ಕೇಳುತ ಬಂದೆ, ಬೇಗದಿಂದಲಿ ಕಾಯೋ ಸಾಗರಶಯನನೆ ॥೨॥

ಮಂದರಧರ ಅರವಿಂದಲೋಚನ ನಿನ್ನ, ಕಂದನೆಂದೆಣಿಸೊ ಎನ್ನ ।
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ, ಬಂದೆನ್ನ ಕಾಯೋ ಶ್ರೀಪುರಂದರವಿಠಲ ॥೩॥

Read more...

ದಾರಿಯಾವುದಯ್ಯ ವೈಕು೦ಠಕೆ

ಸಾಹಿತ್ಯ-ಪುರಂದರದಾಸ


ದಾರಿಯಾವುದಯ್ಯ ವೈಕು೦ಠಕೆ ದಾರಿ ತೋರಿಸಯ್ಯ ।
ಅಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ॥

ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ ।
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ ॥೧॥

ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯ ।
ಈ ಪರಿಯಿ೦ದಲಿ ನಿನ್ನ ನೆನೆಸಿಕೊ೦ಬೆ ಶ್ರೀಪತಿ ಸಲಹೆನ್ನ ಧೂಪನಾರಾಯಣ ॥೨॥

ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ ।
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ ॥೩॥

Read more...

ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ

Monday, 8 February 2016

ಸಾಹಿತ್ಯ-ಪುರಂದರದಾಸ


ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ, ಮಡಿ ಮಾಡುವ ಬಗೆ ಬೇರುಂಟು ।
ಪೊಡವಿ ಪಾಲಕನ ಪಾದಧ್ಯಾನವನು, ಬಿಡದೆ ಮಾಡುವುದದು ಮಡಿಯು ॥

ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ ।
ಹೊಟ್ಟೆಯೊಳಗಿನ ಕಾಮ-ಕ್ರೋಧ-ಮದ-ಮತ್ಸರ ಬಿಟ್ಟು ನಡೆದರೆ ಅದು ಮಡಿಯು ॥೧॥

ದಶಮಿ-ದ್ವಾದಶಿ ಪುಣ್ಯದಿನದಲಿ ವಸುದೇವಸುತನನು ಪೂಜಿಸದೆ ।
ದೋಷಕಂಜದೆ, ಪರರನ್ನ ಭುಂಜಿಸಿ ಯಮಪಾಶಕೆ ಸಿಲುಕುವುದದು ಮಡಿಯೇ ॥೨॥

ಹಸಿದು ಭೂಸುರರು ಮಧ್ಯಾಹ್ನಕಾಲಕೆ ಕುಸಿದು ಮನಗೆ ಬಳಲುತ ಬಂದರೆ ।
ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು ॥೩॥

ಇಚ್ಚೆಯಿಂದ ಮಲಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೇ ।
ಅಚ್ಯುತಾನಂತನ ನಾಮವ ನೆನೆದು ಸಂಚಿತ ಕಳೆವುದು ಅದು ಮಡಿಯು ॥೪॥

ಹಿರಿಯರ, ಗುರುಗಳ, ಹರಿದಾಸರುಗಳ ಚರಣಕೆರಗಿ ಬಲು ಭಕ್ತಿಯಲಿ ।
ಪರಿಪಾಲಿಸು ಎಂದು ಪುರಂದರವಿಠಲನ ಇರುಳು-ಹಗಲು ಸ್ಮರಿಸುವುದು ಮಡಿಯು ॥೫॥

Read more...

ಆಡಲು ಹೋಗೋಣ ಬಾರೊ ರಂಗ

ಸಾಹಿತ್ಯ-ಶ್ರೀಪಾದರಾಜ


ಆಡಲು (ಆಡ/ಪೋಪು) ಹೋಗೋಣ ಬಾರೊ ರಂಗ, ಕೂಡಿ ಯಮುನೆ ತೀರದಲ್ಲಿ ।
ಚಿಣ್ಣಿಕೋಲು ಚೆಂಡು ಬುಗರಿ, ಬಣ್ಣಬಣ್ಣದ ಆಟಗಳನು ॥

ಜಾಹ್ನವಿಯ ತೀರವಂತೆ, ಜನಕರಾಯನ ಕುವರಿಯಂತೆ
ಜಾನಕೀ ವಿವಾಹವಂತೆ, ಜಾಣ ನೀನು ಬರಬೇಕಂತೆ ॥೧॥

ಕುಂಡನಿಯ ನಗರವಂತೆ, ಭೀಷ್ಮಕನ (ಭೀಷ್ಮಕರಾಯನ) ಕುವರಿಯಂತೆ,
ಶಿಶುಪಾಲನ ಒಲ್ಲಳಂತೆ, ನಿನಗೆ ಓಲೆ ಬರೆದಳಂತೆ ॥೨॥

ಕೌರವರಿಗೆ ಪಾಂಡವರು, ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ, ರಂಗವಿಠಲ ಬರಬೇಕಂತೆ ॥೩॥

Read more...

ಪೊಂಗೊಳಲನೂದುತಿಹ ಯದುಕುಲೋತ್ತುಂಗ

Friday, 9 October 2015

ಸಾಹಿತ್ಯ-ಪುರಂದರದಾಸ


ಪೊಂಗೊಳಲನೂದುತಿಹ ಯದುಕುಲೋತ್ತುಂಗ ।
ತಿಂಗಳಪಾಂಗನೆ ರಜತಶುಭಾಂಗ ॥

ಸಲಿಲಗಾಚಲಧರನು ಇಳೆಧರೋಜ್ವಲನೇತ್ರ ।
ಬಲಿಯ ಬೇಡಿದನು ಭೃಗುಕುಲದಿ ಜನಿಸಿ ।
ಬಲಿದ ಬಿಲ್ಲನೆ ಮುರಿದು ಲಲನೆಯರ ವಶನಾಗಿ ।
ಹೂಳರ ಸಂಬೋಧಿಸಿದ ಚೆಲುವ ಹಯವವೇರ್ದ ॥೧॥

ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ ।
ಅಡವಿಚರ ಕಡುಕೋಪಿ ಕೊಡೆಯ ಪಿಡಿದು ।
ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ ।
ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ ॥೨॥

ವಾರಿಚರ ಕೂರ್ಮಾವತಾರ ಸೂಕರ ಕ್ರೂರ ।
ಧಾರಿಣಿಯನೆಳೆದು ಶೂರರನು ಗೆಲಿದು ।
ನೀರಜಾಕ್ಷಿಯ ತಂದು ನಾರಿಪ್ರಿಯ ವ್ರತವಳಿದು ।
ಏರಿದನು ಹಯವ ಶ್ರೀ ಪುರಂದರವಿಠಲ ॥೩॥

Read more...

ಘಲ್ಲು ಘಲ್ಲೆನುತ

Monday, 31 August 2015


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ದಾದೆನುತ ।
ಬಲ್ಲಿದ ರಂಗನ್‌ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ ॥

ಅರೆದರು ಅರಿಶಿಣವ ಅದಕೆ ಬೆರಸ್ಯಾರೆ ಸುಣ್ಣವ ।
ಅಂದವುಳ್ಳ ರಂಗನ್‌ ಮೇಲೆ ಚೆಲ್ಲಿದರೋಕುಳಿಯೋ ॥೧॥

ಹಾಲಿನೋಕುಳಿಯೋ ಒಳ್ಳೆ ನೀಲದೋಕುಳಿಯೋ ।
ಲೋಲನಾದ ರಂಗನ್‌ ಮ್ಯಾಲೆ ಹಾಲಿನೋಕುಳಿಯೊ ॥೨॥

ತುಪ್ಪದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ ।
ಒಪ್ಪವುಳ್ಳ ರಂಗನ್‌ ಮ್ಯಾಲೆ ತುಪ್ಪದೋಕುಳಿಯೋ ॥೩॥

Read more...

ಮುಂಜಾನೆದ್ದು ಕುಂಬಾರಣ್ಣ


ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡನ ಹಾರ್ಯಾಡಿ ಮಣ್ಣ ತುಳಿದಾನ ।
ಹಾರಿಹಾರ್ಯಾಡಿ ಮಣ್ಣ ತುಳಿಯುತ ಮಾಡ್ಯಾನ ನಾರ್ಯಾರು ಹೋರುವಂತ ಐರಾಣಿ ॥

ಹೊತ್ತಾರೆದ್ದು ಕುಂಬಾರಣ್ಣ ತುಪ್ಪಬಾನುಂಡನ ಘಟ್ಟೀಸಿ ಮಣ್ಣ ತುಳಿದಾನ ।
ಘಟ್ಟೀಸಿ ಮಣ್ಣ ತುಳಿಯುತ ಮಾಡ್ಯಾನ ಮಿತ್ರೇರು ಹೋರುವಂತ ಐರಾಣಿ ॥೧॥

ಅಕ್ಕಿಹಿಟ್ಟು ನಾನು ತಕ್ಕೊಂಡು ಬಂದೀವ್ನಿ ಗಿಂಡೀಲಿ ತಂದೀವ್ನಿ ತಿಳಿದುಪ್ಪ ।
ಗಿಂಡೀಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ ತಂದಿಡು ನಮ್ಮ ಐರಾಣಿ ॥೨॥

ಕುಂಬಾರಣ್ಣನ ಮಡದಿ ಕಡಗದ ಕೈಯಿಕ್ಕಿ ಕೊಡದ ಮ್ಯಾಲೇನ ಬರೆದಾಳ ।
ಕೊಡದ ಮ್ಯಾಲೇನ ಬರೆದಾಳ್ ಕಲ್ಯಾಣದ ಶರಣಬಸವನ ನಿಲಿಸ್ಯಾಳ ॥೩॥

Read more...

नींद से आँख खुली है

Monday, 17 August 2015

साहित्य - शाहिद कबीर
संगीत - जगजीत सिंघ
गायन - चित्रा सिंघ


नींद से आँख खुली है अभी देखा क्या है |
देख लेना अभी कुछ देर में दुनिया क्या है ॥

बाँध रखा है किसी सोच ने घर से हम को |
वर्ना अपना दर-ओ-दीवार से रिश्ता क्या है ॥१॥

रेत की, ईंट की, पत्थर की हो, या मिट्टी की |
किसी दीवार के साये का भरोसा क्या है ॥२॥

घेर कर मुझ को भी लटका दिया मस्लूब के साथ
मैं ने लोगों से यह पूछा था कि क़िस्सा क्या है ॥३॥

संग-रेज़ों के सिवा कुछ तिरे दामन में नहीं
क्या समझ कर तू लपकता है उठाता क्या है ॥४॥

अपनी दानिस्त में समझे कोई दुनिया ‘शाहिद’ |
वर्ना हाथों में लकीरों के अलावा क्या है ॥५॥


मस्लूब=Crucified Person
संग-रेज़ो=Pebbles
तिरे दामन - Your cloak
दानिस्त=Knowledge

Chitra Singh performs :

Read more...

एक ही बात ज़माने की किताबों में नहीं

Wednesday, 5 August 2015

साहित्य - सुदर्शन फ़ाकिर
संगीत - ताज अहमद ख़ान
गायन - महमद रफ़ी


एक ही बात ज़माने की किताबों में नहीं |
जो ग़म-ए-दोस्त में नशा है, शराबों में नहीं ॥

हुस्न की भीख ना मांगेंगे, ना जल्वों की कभी |
हम फ़क़ीरों से मिलो खुल के, हिजाबों में नहीं ॥१॥

हर जगह बीते हैं आवारा ख़यालों की तरह |
ये अलग बात है हम आपके ख़्वाबों में नहीं ॥२॥

ना डूबो साग़र-ओ-मीना में यह ग़म, एै ‘फ़ाकिर’ |
के मक़ाम इनका दिलों में हैं, शराबों में नहीं ॥३॥


साग़र-ओ-मीना=Cup and Goblet/Decanter (of wine)

Mohammad Rafi performs :

Read more...

तुम आये हो ना शब-ए-इंतज़ार गुज़री है

Monday, 3 August 2015

साहित्य - फ़ैज़ अहमद फ़ैज़

रात यूँ दिल में तेरी खोयी हुयी याद आयी,
जैसे वीराने में चुपके से बहार आ जाये,
जैसे सहरा में हौले से चले बादल सी,
जैसे बीमार को बेबजह क़रार आ जाये

तुम आये हो, ना शब-ए-इंतज़ार गुज़री है |
तलाश में है सहर, बार बार गुज़री है ॥

जुनूँ में जितनी भी गुज़री, ब-कार गुज़री है |
अगरचे दिल पे ख़राबी हज़ार गुज़री है ॥१॥

हुयी है हज़रत-ए-नासेह से गुफ़्तगू जिस शब |
वह शब ज़रूर सर-ए-कू-ए-यार गुज़री है ॥२॥

वह बात सारे फ़साने में जिसका ज़िक्र ना था |
वह बात उनको बहुत ना-गवार गुज़री है ॥३॥

ना गुल खिले हैं, ना उनसे मिले, ना मय पी है |
अजीब रंग में अब के बहार गुज़री है ॥४॥

चमन पे ग़ारत-ए-गुल-चीं से जाने क्या गुज़री है |
क़फ़स से आज सबा बे-क़रार गुज़री है ॥५॥


ब-कार=useful, well spent
अगरचे=although
नासेह = Advisor, Preacher
कू-ए-यार=Beloved's home/street
सर-ए-कू-ए-यार=Towards/at the beloved's home
ग़ारत=pillage, plunder
गुल-चीं=flower picker
ग़ारत-ए-गुल-चीं=destruction by the flower picker
क़फ़स=Cage
बे-क़रार=uneasy,restless

Dr. Radhika Chopra performs (YouTube)

Read more...

Popular Posts