Pages

ನಾ ನಿನ್ನ ಧ್ಯಾನದೊಳು ಇರಲು ಸದಾ

Wednesday 14 February 2018

ಸಾಹಿತ್ಯ-ಪುರಂದರದಾಸ


ನಾ ನಿನ್ನ ಧ್ಯಾನದೊಳು ಇರಲು ಸದಾ ।
ಮಿಕ್ಕ ಮಾನವರೇನು ಮಾಡುವರೋ ಗೋಪಾಲ ॥

ಮತ್ಸರಿಸಿದರೇನು ಮಾಡಲಾಕರು ಎನ್ನ
ಅಚ್ಯುತ ನಿನ್ನಯ ಕೃಪೆಯಿರಲು ।
ನಿತ್ಯವು ನಿನ್ನಯ ನಾಮವ ಜಪಿಸಲು
ಕಿಚ್ಚಿಗೆ ಇರುವೆ ಮುತ್ತುವವೇ ರಂಗ ॥೧॥

ಗಾಳಿಲಿ ಕುದುರೆ ವೈಯ್ಯಾರದಿ ತಿರುಗಲು
ಧೂಳದು ರವಿಗೆ ತಾ ಮುಸುಕುವದೇ ।
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿ ನಡುಗುವದೇ ಹೇಳೆಲೋ ರಂಗ ॥೨॥

ಕನ್ನಡಿಯೊಳಗಣ ಗಂಟು ಕಂಡು ಕಳ್ಳ
ಕನ್ನವಿಕ್ಕಲು ಅವನ ವಶವಹುದೇ ।
ನಿನ್ನ ನಂಬಿದೆ ನೀ ಎನ್ನ ಸಲಹಬೇಕೋ
ಪನ್ನಗಶಯನ ಶ್ರೀಪುರಂದರವಿಠ್ಠಲ ॥೩॥

0 comments:

Popular Posts